ದೇಹವೆಂಬ ಹಣತೆಯಲ್ಲಿ

ದೇಹವೆಂಬ ಹಣತೆಯಲ್ಲಿ
ಎಣ್ಣೆ ಎಂಬ ಚೇತನದಲಿ
ಬತ್ತಿ ಎಂಬ ಭಕ್ತಿ ಇಟ್ಟು
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಕಿಗಾಗಿ
ನಿತ್ಯ ಶಾಂತಿ ತೃಪ್ತಿಗಾಗಿ
ಬಾಳ ಬದುಕು, ಸುಗಮಕ್ಕಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಹಲವು ಮೌಢ್ಯ ಸಂಪ್ರದಾಯ
ಭೂತ ಪ್ರೇತ ಮಂತ್ರ ಮಾಟ
ತೊರೆದು ವಿದ್ಯೆ ಕಲಿಕೆಗಾಗಿ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಸತ್ಯ ಧರ್ಮ ಬೆಳಗುವಂಥ
ನ್ಯಾಯ ನೀತಿ ನೀಡುವಂಥ
ಮನುಜ ಬಾಳ್ವೆ ನಡೆಸುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||

ಪ್ರೀತಿ ಪ್ರೇಮ ಸ್ನೇಹ ಬೆಸೆವ
ಎಲ್ಲರೊಂದಿಗೆ ಬಾಳುವಂಥ
ಸುಜನರಾಗಿ ಬಾಳುವಂಥ
ದೀಪ ಹಚ್ಚಿರಿ ನೀವು ದೀಪ ಹಚ್ಚಿರಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ
Next post ಮಂದಸ್ಮಿತ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys